ಮನೆಬಿಟ್ಟು ಹೋಗಿದ್ದ ರಾಜ್ಯ ಸಚಿವರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ಪತ್ತೆ

ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ ಬೀದರ್ ಜಿಲ್ಲೆಯ ಸಚಿವರೊಬ್ಬರ ಸೋದರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ ಬೀದರ್ ಜಿಲ್ಲೆಯ ಸಚಿವರೊಬ್ಬರ ಸೋದರ ಸಂಬಂಧಿ ಬಾಲಕ ಹೈದರಾಬಾದ್ ನಲ್ಲಿ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಪತ್ತೆಯಾಗಿದ್ದಾನೆ.
ಶುಕ್ರವಾರ ಹೈದರಾಬಾದ್ ಪೊಲೀಸರು ಮೂವರು ಬಾಲಕರನ್ನು ರಕ್ಷಿಸಿದ್ದಾರೆ. ನಗರಕ್ಕೆ ಬಂದ ಬಾಲಕರು ಚಾರ್ ಮಿನಾರ್ ವೀಕ್ಷಿಸಿ,ಸೆಪ್ಟಂಬರ್ 5 ರಂದು ನಡೆಯಲಿರುವ ಗಣೇಶ್ ವಿಸರ್ಜನೆ ಕಾರ್ಯಕ್ರಮ ನೋಡಲು ಕಾಯುತ್ತಿದ್ದರು.  ಗುರುವಾರ ರಾತ್ರಿ ಈ ಮೂವರು ಬಾಲಕರು ಮನೆ ಬಿಟ್ಟು ಬಂದಿದ್ದರು.
ಮನೆ ಬಿಟ್ಟ ಮೂವರು ಬಾಲಕರು ರೈಲು ಹತ್ತಿಕೊಂಡು ನಗರಕ್ಕೆ ಆಗಮಿಸಿದ್ದರು, ನಗರ ಸುತ್ತಿದ ಅವರು ಸುಲ್ತಾನ್ ಬಜಾರ್ ನಲ್ಲಿರುವ ಗಣೇಶ್ ಪೆಂಡಾಲ್ ಹತ್ತಿರ ಬಂದಿದ್ದಾರೆ, ಅಲ್ಲಿ ಗಣೇಶ ಕೂರಿಸಿದ್ದ ಆಯೋಜಕರು ಶುಕ್ರವಾರ ಬೆಳಗ್ಗೆ ಮೂವರನ್ನು ವಿಚಾರಿಸಿದ್ದಾರೆ, ಒಂದು ಗಂಟೆಯ ಬಳಿಕ ಗಸ್ತಿನಲ್ಲಿದ್ದ ಪೊಲೀಸರು ಆ ಸ್ಥಳಕ್ಕೆ ತೆರಳಿದರು, ಈ ವೇಳೆ ತೆಲುಗು ಬಾರದ ಬಾಲಕರು ಉತ್ತರ ನೀಡಲು ತಡವರಿಸುತ್ತಿದ್ದರು ಎಂದು ಸುಲ್ತಾನ್ ಬಜಾರ್ ಇನ್ಸ್ ಪೆಕ್ಟರ್ ಪಿ. ಶಿವಶಂಕರ್ ಹೇಳಿದ್ದಾರೆ.
ಅವರು ಬೀದರ್ ನಿಂದ ಮನೆ ಬಿಟ್ಟು ಬಂದವರೆಂದು ನಂತರ ಪೊಲೀಸರಿಗೆ ತಿಳಿದು ಬಂದಿದೆ, ಬೀದರ್ ಪೊಲೀಸರಿಗೆ ಈ ಸಂಬಂಧ ವಿಷಯ ಮುಟ್ಟಿಸಿದಾಗ ನಾಪತ್ತೆ ಪ್ರಕರಣ ದಾಖಲಾಗಿರುವುದರ ಬಗ್ಗೆ ವಿವರಿಸಿದ್ದಾರೆ, ನಂತರ ಬಾಲಕ ಬೀದರ್  ಸತಚಿ ಈಶ್ವರ್ ಭೀಮಣ್ಣ ಖಂಡ್ರೆ ಅವರ ಸೋದರಳಿಯ ಎಂಬುದಾಗಿ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com