ಮನೆ ಬಿಟ್ಟ ಮೂವರು ಬಾಲಕರು ರೈಲು ಹತ್ತಿಕೊಂಡು ನಗರಕ್ಕೆ ಆಗಮಿಸಿದ್ದರು, ನಗರ ಸುತ್ತಿದ ಅವರು ಸುಲ್ತಾನ್ ಬಜಾರ್ ನಲ್ಲಿರುವ ಗಣೇಶ್ ಪೆಂಡಾಲ್ ಹತ್ತಿರ ಬಂದಿದ್ದಾರೆ, ಅಲ್ಲಿ ಗಣೇಶ ಕೂರಿಸಿದ್ದ ಆಯೋಜಕರು ಶುಕ್ರವಾರ ಬೆಳಗ್ಗೆ ಮೂವರನ್ನು ವಿಚಾರಿಸಿದ್ದಾರೆ, ಒಂದು ಗಂಟೆಯ ಬಳಿಕ ಗಸ್ತಿನಲ್ಲಿದ್ದ ಪೊಲೀಸರು ಆ ಸ್ಥಳಕ್ಕೆ ತೆರಳಿದರು, ಈ ವೇಳೆ ತೆಲುಗು ಬಾರದ ಬಾಲಕರು ಉತ್ತರ ನೀಡಲು ತಡವರಿಸುತ್ತಿದ್ದರು ಎಂದು ಸುಲ್ತಾನ್ ಬಜಾರ್ ಇನ್ಸ್ ಪೆಕ್ಟರ್ ಪಿ. ಶಿವಶಂಕರ್ ಹೇಳಿದ್ದಾರೆ.