ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕವಿತಾ ಲಂಕೇಶ್ ಅವರು, ತಮ್ಮ ವಿಚಾರಧಾರೆಗಳಿಂದಲೇ ಗೌರಿಯವರು ಹತ್ಯೆಯಾಗಿರುವ ಸಾಧ್ಯಗಳಿವೆ. ಈ ರೀತಿಯ ಕೃತ್ಯಗಳು ಇನ್ನೆಲ್ಲೂ ನಡೆಯಬಾರದು. ಕಲಬುರ್ಗಿ ಕುಟುಂಬ ಕೂಡ ನ್ಯಾಯಕ್ಕಾಗಿ ಕಾಯುತ್ತಿದೆ. ನಮಗೆ ಇಂತಹ ಸ್ಥಿತಿ ಬರಬಾರದು. ಪತ್ರಕರ್ತರ ಜೀವಕ್ಕೆ ಅಪಾಯ ಎದುರಾಗಬಾರದು, ಗೌರಿ ಹತ್ಯೆ ಪ್ರಕರಣದಲ್ಲಿ ಸರ್ಕಾರ ನಮಗೆ ನ್ಯಾಯ ಒದಗಿಸಬೇಕೆಂದು ಹೇಳಿದ್ದಾರೆ.