ಬೆಂಗಳೂರು: ಹುಸಿ ಬಾಂಬ್ ಕರೆಗೆ ವೈಯಕ್ತಿಕ ದ್ವೇಷ ಕಾರಣ

ವಿಧಾನ ಸೌಧ ಮತ್ತು ನೆಹರೂ ತಾರಾಲಯಕ್ಕೆ ಮೊನ್ನೆ ಸೋಮವಾರ ಹುಸಿ ಬಾಂಬ್ ಬೆದರಿಕೆ ...
ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಶ್ರೀಧರ್
ಹುಸಿ ಬಾಂಬ್ ಕರೆ ಮಾಡಿದ ಆರೋಪಿ ಶ್ರೀಧರ್
ಬೆಂಗಳೂರು: ವಿಧಾನ ಸೌಧ ಮತ್ತು ನೆಹರೂ ತಾರಾಲಯಕ್ಕೆ ಮೊನ್ನೆ ಸೋಮವಾರ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಮಂಡ್ಯ ಮೂಲದ ಶ್ರೀಧರ್ ಎಂಬಾತನಾಗಿದ್ದಾನೆ. ಆತ ಪೀಣ್ಯದಲ್ಲಿ ವಾಸಿಸುತ್ತಿದ್ದಾನೆ.
ಈತ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಅನೇಕ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದ. ಶ್ರೀಧರ್ ತನ್ನ ಇಬ್ಬರು ಮಿತ್ರರಾದ ನಾಗರಾಜ್ ಮತ್ತು ಸುರೇಶ್ ಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕಾಗಿ ಶ್ರೀಧರ್ ಸುರೇಶ್ ಬಳಿಯಿಂದ 60,000 ರೂಪಾಯಿಗಳನ್ನು ಕೂಡ ತೆಗೆದುಕೊಂಡಿದ್ದ. 
ಆದರೆ ಸುರೇಶ್ ಗೆ ಕೆಲಸ ಸಿಗದಿದ್ದಾಗ ನಾಗರಾಜ್ ಜೊತೆ ಸೇರಿ ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಸಿಟ್ಟುಗೊಂಡ ಶ್ರೀಧರ್ ಪೊಲೀಸರಿಗೆ ಕರೆ ಮಾಡಿ ಸುರೇಶ್ ಮತ್ತು ನಾಗರಾಜ್ ವಿಧಾನ ಸೌಧ ಹಾಗೂ ನೆಹರೂ ತಾರಾಲಯ ಬಳಿ ಬಾಂಬ್ ಇಟ್ಟು ಸ್ಫೋಟಿಸಲು ಸಂಚು ನಡೆಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com