ಪ್ರತಿ ವರ್ಷದಂತೆ ಈ ವರ್ಷವೂ ರೇಷನ್ ಗಾಗಿ ಉಚಿತ ಕೂಪನ್ ಪಡೆಯಲು ತಮ್ಮ ಚೌಟ್ರಿಗೆ ಬರುವಂತೆ ಜನರಿಗೆ ತಿಳಿಸಿದ್ದರು. ಇದ್ರಿಂದಾಗಿ ಯಲಹಂಕ ಬಳಿಯ ಮಿಟಗಾನಹಳ್ಳಿಗೆ ಕಳೆದ ರಾತ್ರಿಯೇ ಬೆಂಗಳೂರು, ತೂಮಕೂರು, ಚಿಕ್ಕಬಳ್ಳಾಪುರ ನೆರೆಯ ಆಂಧ್ರ ಹಾಗೂ ಕೇರಳದಿಂದ ಮುಸ್ಲಿಂ ಬಾಂಧವರು ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಕೂಪನ್ ವಿತರಿಸಲು ಪ್ರಾರಂಭ ಮಾಡಲಾಗಿದ್ದು, ಸರತಿ ಸಾಲಿನಲ್ಲಿ ನಿಂತಿದ್ದ ಜನರಿಂದ ನೂಕುನೂಗ್ಗಲು ಉಂಟಾಗಿದೆ.