ಬೆಂಗಳೂರು : ಬೆಂಗಳೂರಿನ ಸುಮಾರು 262 ಕೆರೆಗಳಲ್ಲಿ ಬೆಳ್ಳಂದೂರು ಕೆರೆ ವಿಷಕಾರಿ ನೊರೆ ಸೋರಿಕೆಯ ಸಂಕೇತವಾಗಿ ಮಾರ್ಪಟ್ಟಿದ್ದು, ತ್ಯಾಜ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಮತ್ತೆ ವಿಷಯುಕ್ತ ನೊರೆ ಕಾಣಿಸಿಕೊಂಡಿದೆ.
ವಿಷಕಾರಿ ನೊರೆ ನೀರನ್ನು ನಿಯಂತ್ರಣಕ್ಕೆ ತಂದರೆ ಇಲ್ಲಿನ ನೀರನ್ನು ಇಡೀ ಬೆಂಗಳೂರಿಗೆ ನೀಡಬಹುದು ಎಂದು ವರದಿಗಳು ಹೇಳುತ್ತವೆ.
ಆದರೆ,ಇತ್ತೀಚಿನ ದಿನಗಳಲ್ಲಿ ಅನೇಕ ಬಾರಿ ವಿಷಕಾರಿ ನೊರೆ ಇಲ್ಲಿ ಸೋರಿಕೆಯಾಗುತ್ತಲೇ ಇದೆ. ಅನೇಕ ಸಂದರ್ಭಗಳಲ್ಲಿ ಬೆಂಕಿಯೂ ಕಾಣಿಸಿಕೊಂಡಿದೆ.
ಕಳೆದ ವರ್ಷ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು ಕೆರೆಯ ಸುತ್ತಮುತ್ತಲಿನ 76 ಕಲುಷಿತ ಉದ್ಯಮಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಆದೇಶ ನೀಡಿತ್ತು.
ನೊರೆ ನಿಯಂತ್ರಿಸಲು ಬಿಡಿಎ ಹಲವು ಕ್ರಮ ಕೈಗೊಂಡಿದ್ದರೂ ಮಳೆ ಬಂದಾಗಲೆಲ್ಲ ಇದು ಮತ್ತೆ ಮರುಕಳಿಸುತ್ತಿದೆ. ಇದು ಮುಗಿಯದ ಗೋಳಿನಂತಾಗಿದೆ.
Advertisement