ಸತ್ತರೂ ಕೇಳುವವರಿಲ್ಲ, ದಯಮಾಡಿ ರಸ್ತೆ ಸಂಪರ್ಕ ಕಲ್ಪಿಸಿ: ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರ ಅಳಲು

ಕುಗ್ರಾಮವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂಬ ಗ್ರಾಮಸ್ಥನೋರ್ವನ ಕೂಗು ಇದೀಗ ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಲಗೊಳ್ಳುತ್ತಿದೆ.
ನಾನಿಗೌಡ ಶೇರ್ ಮಾಡಿರುವ ಚಿತ್ರಗಳು
ನಾನಿಗೌಡ ಶೇರ್ ಮಾಡಿರುವ ಚಿತ್ರಗಳು
ಕಾರವಾರ: ಕುಗ್ರಾಮವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂಬ ಗ್ರಾಮಸ್ಥನೋರ್ವನ ಕೂಗು ಇದೀಗ ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಲಗೊಳ್ಳುತ್ತಿದೆ.
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಾನಿಗೌಡ ಎಂಬ ಖಾತೆದಾರ ಹೇಳಿಕೊಂಡಿರುವಂತೆ, ತಮ್ಮದು ಕಾರವಾರ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಾವಿಕೊಡ್ಲ ಮತ್ತು ಬೆಲೆಗದ್ದೆ ನಡುವಿನ ಗ್ರಾಮವಾಗಿದ್ದು, ಊರಿಗೆ ಯಾವುದೇ ರೀತಿಯ ರಸ್ತೆ ಸಂಪರ್ಕವಿಲ್ಲ. ಊರಿನ ನಡುವೆ ಇರುವ ಭೂಮಾಲೀಕರು ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ತಮ್ಮ ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದ್ದು, ದಯಮಾಡಿ ತಮಗೆ ನ್ಯಾಯ ಕೊಡಿಸಿ ಎಂದು ನಾನಿಗೌಡ ಫೇಸ್ ಬುಕ್ ನಲ್ಲಿ ಆಗ್ರಹಿಸಿದ್ದಾರೆ.
ಅಲ್ಲದೆ ತಮ್ಮ ಊರಿನಲ್ಲಿ ಸಂಭವಿಸುವ ಯಾವುದೇ ರೀತಿಯ ಸಾವು-ನೋವುಗಳಿಗೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಭೂಮಾಲೀಕರೇ ಕಾರಣ ಎಂದು ಫೇಸ್ ಬುಕ್ ಖಾತೆದಾರ ನಾನಿಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಂತೆಯೇ ಈ ಬಗ್ಗೆ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com