ಏರೋ ಇಂಡಿಯಾ : ಬೆಂಗಳೂರಿನಿಂದ ದೋಚಿ ಲಖನೌಗೆ ಸ್ಥಳಾಂತರ ?

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ವಿಚಾರದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ಹಣಾಹಣಿಯು ಅಪಾರ ಆರ್ಥಿಕತೆ ಮತ್ತು ರಾಜಕೀಯ ಪರಿಣಾಮವನ್ನು ಬೀರಲಿದೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ
Updated on

ನವ ದೆಹಲಿ : ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ವಿಚಾರದಲ್ಲಿ  ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ಹಣಾಹಣಿಯು ಅಪಾರ ಆರ್ಥಿಕತೆ ಮತ್ತು ರಾಜಕೀಯ ಪರಿಣಾಮವನ್ನು ಬೀರಲಿದೆ.

ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ದ್ವೈವಾರ್ಷಿಕದ  ವೈಮಾನಿಕ ಪ್ರದರ್ಶನವನ್ನು  1996ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಯಿತು.750ಕ್ಕೂ ಹೆಚ್ಚು ವಿಶ್ವದ ಹಾಗೂ ದೇಶದ ಬಾಹ್ಯಾಕಾಶ ಮತ್ತು ಮೇಜರ್ ಗಳ ಒಕ್ಕೂಟ 2017ರಲ್ಲಿ ಪಾಲ್ಗೊಂಡಿದ್ದರು.
ಈ ಮಧ್ಯೆ 109 ರಾಷ್ಟ್ರಗಳು ತಮ್ಮ ಸಚಿವರು,  ರಕ್ಷಣಾ ಮುಖ್ಯಸ್ಥರು, ಕಾರ್ಯದರ್ಶಿಗಳ ಮಟ್ಟದ ನಿಯೋಗವನ್ನು ಕಳುಹಿಸಿದ್ದರು. ಅಲ್ಲದೇ ಒಂದೂವರೆ ಲಕ್ಷ ಉದ್ಯಮಿಗಳು ಮತ್ತು 3 ಲಕ್ಷ ವೀಕ್ಷಕರು  ಭೇಟಿ ನೀಡಿದ್ದರು.
 ಇಂತಹದ್ದರಲ್ಲಿ ಕೇಂದ್ರಸರ್ಕಾರ ಈಗ ರಾಜಕೀಯದಿಂದ  ಯಲಂಹಕದಿಂದ ವಾಯುನೆಲೆಯಿಂದ ಲಖನೌನ  ಬಕ್ಷಿ ಕಿ ತಲಾಬ್ ನ ವಾಯುಪಡೆ ಕೇಂದ್ರಕ್ಕೆ ಸ್ಥಳಾಂತರ ಮಾಡುವ ಪ್ರಸ್ತಾವ ಮಾಡಿದ್ದು, ಅಪಾರ ಎದೆಯುರಿಗೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com