ಮೊದಲ ಬಾರಿಗೆ ವಾಜಪೇಯಿ ಅವರನ್ನು ಭೇಟಿ ಮಾಡಿದ ಕ್ಷಣವನ್ನು ನೆನೆಪಿಸಿಕೊಂಡಿರುವ ರಾಮಚಂದ್ರಗೌಡ ಅವರ ಜೊತೆಗಿನ ತಮ್ಮ ಸ್ನೇಹ ಮತ್ತಷ್ಟು ಗಟ್ಟಿಗೊಂಡ ಬಗ್ಗೆ ತಿಳಿಸಿದ್ದಾರೆ,. 1970ರ ಡಿಸೆಂಬರ್ 8 , ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಜನಸಂಘದಿಂದ ಬೆಂಗಳೂರು ನಗರ ಕಾರ್ಪೋರೇಷನ್ ಗೆ ಸ್ಪರ್ಧಿಸಿದ್ದ 40 ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆಬಂದಿದ್ದರು, ಎಲ್ಲಾ ಅಭ್ಯರ್ಥಿಗಳನ್ನ ಪರಿಚಯಿಸಲಾಯಿತು, ಆಗ ನೀವು ಗೆಲ್ಲುತ್ತೀರಿ ಎಂದು ನನಗೆ ಹೇಳಿದರು, ಅವರ ಮಾತಿನಂತೆ ಬೆಂಗಳೂರು ಸಿಟಿ ಕಾರ್ಪೋರೇಷನ್ ಗೆ ಜನಸಂಘ ದಿಂದ ಆರಿಸಲ್ಪಟ್ಟ ಏಕೈಕ ಸದಸ್ಯನಾಗಿದ್ದೆ.