ಪರಿಹಾರ ಸಾಮಾಗ್ರಿ ಸಂಗ್ರಹಕ್ಕೆ ಬೆಂಗಳೂರಿನ ನಾಗರೀಕರು ಉದಾರವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿರುವ ಮೊಹಮ್ಮದ್ ಅನೀಸ್ ಅವರು ಮಾತನಾಡಿ, ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸುವುದು ಎಷ್ಟು ಮುಖ್ಯ ಎಂಬುದು ತಿಳಿದಿದೆ. ಹೀಗಾಗಿ ನಿದ್ರೆ ಇಲ್ಲದೆ, ಗುರಿ ತಲುಪವವರೆಗೂ ವಾಹನಗಳನ್ನು ಚಾಲನೆ ಮಾಡಿದ್ದೇವೆ. ಕೊಡಗುವಿಗೆ 48 ಟ್ರಂಕ್ ಗಳು ತೆರಳಿದ್ದು, ಇದರಲ್ಲಿ ತಮ್ಮದೂ ಕೂಡ ಒಂದು ಟ್ರಕ್ ಆಗಿದೆ ಎಂದು ಹೇಳಿದ್ದಾರೆ.