ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಸಹ ತಮ್ಮ ಕೈಯಲ್ಲಿ ಆಗುವ ಸಣ್ಣ ಪ್ರಮಾಣದ ಸಹಾಯಕ್ಕೆ ಮುಂದಾಗಿದ್ದು ಈ ವಾರ ನೀಡಲಾಗುವ ಮಾಂಸಾಹಾರವನ್ನು ನಿಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಮ್ಮ ಈ ವಾರದ ಮಾಂಸಾಹಾರವನ್ನು ತ್ಯಾಗ ಮಾಡಿರುವ ಸುಮಾರು 4,500 ಕೈದಿಗಳು ಆ ಹಣವನ್ನು ಅಂದರೆ ಸುಮಾರು 2 ಲಕ್ಷ ರುಪಾಯಿಯನ್ನು ಕೊಡಗು ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುವಂತೆ ಪತ್ರ ಬರೆದಿರುವುದಾಗಿ ಎಡಿಜಿಪಿ(ಕಾರಾಗೃಹ) ಎನ್ ಎಸ್ ಮೇಘರಿಕ್ ಅವರು ತಿಳಿಸಿದ್ದಾರೆ.
ಕೊಡಗಿನಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದಲ್ಲಿ ಇಲ್ಲಿಯವರೆಗೂ 15 ಮಂದಿ ಮೃತಪಟ್ಟಿದ್ದಾರೆ.