ಕೊಡಗು ಸಂತ್ರಸ್ತರಿಗೆ ನೆರವಾಗಲು ಮಾಂಸಾಹಾರ ತ್ಯಾಗ ಮಾಡಿದ ಕೈದಿಗಳು!

ಮಹಾ ಜಲಪ್ರಳಯಕ್ಕೆ ಕೊಡಗು ನಲುಗಿದ್ದು ಸಂತ್ರಸ್ತರ ನೆರವಿಗಾಗಿ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿಸುತ್ತಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಮಹಾ ಜಲಪ್ರಳಯಕ್ಕೆ ಕೊಡಗು ನಲುಗಿದ್ದು ಸಂತ್ರಸ್ತರ ನೆರವಿಗಾಗಿ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿಸುತ್ತಿದ್ದಾರೆ. 
ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಸಹ ತಮ್ಮ ಕೈಯಲ್ಲಿ ಆಗುವ ಸಣ್ಣ ಪ್ರಮಾಣದ ಸಹಾಯಕ್ಕೆ ಮುಂದಾಗಿದ್ದು ಈ ವಾರ ನೀಡಲಾಗುವ ಮಾಂಸಾಹಾರವನ್ನು ನಿಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 
ತಮ್ಮ ಈ ವಾರದ ಮಾಂಸಾಹಾರವನ್ನು ತ್ಯಾಗ ಮಾಡಿರುವ ಸುಮಾರು 4,500 ಕೈದಿಗಳು ಆ ಹಣವನ್ನು ಅಂದರೆ ಸುಮಾರು 2 ಲಕ್ಷ ರುಪಾಯಿಯನ್ನು ಕೊಡಗು ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುವಂತೆ ಪತ್ರ ಬರೆದಿರುವುದಾಗಿ ಎಡಿಜಿಪಿ(ಕಾರಾಗೃಹ) ಎನ್ ಎಸ್ ಮೇಘರಿಕ್ ಅವರು ತಿಳಿಸಿದ್ದಾರೆ. 
ಕೊಡಗಿನಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದಲ್ಲಿ ಇಲ್ಲಿಯವರೆಗೂ 15 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com