ಇಂದು ಕಾರ್ಡ್ ರಸ್ತೆಯಲ್ಲಿ ಮೇಲು ಸೇತುವೆಯನ್ನುಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ನಗರದಲ್ಲಿನ ಎಲ್ಲಾ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ತೆರವುಗೊಳಿಸಿದೆ. ಆದರೆ ಜಾಹೀರಾತುದಾರರು ತಮ್ಮ ವ್ಯವಹಾರಕ್ಕೆ ಬೆಂಬಲ ನೀಡುವಂತೆ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಜಾಹೀರಾತು ನೀತಿಗೆ ಬಗ್ಗೆ ಚಿಂತನೆ ನಡೆದಿದೆ ಎಂದರು.