ಬಳಿಕ ಮಾತನಾಡಿದ ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ಅವರು, ಮಾದಕ ದ್ರವ್ಯ ಮುಕ್ತ ಸಮಾಜ ನಮಗೆ ಬೇಕಿದೆ. ಮಾದಕ ವ್ಯಸನದ ವಿರುದ್ಧದ ಪ್ರಚಾರಕ್ಕೆ ನಮ್ಮದು ಪ್ರಾದೇಶಿಕ ಕೇಂದ್ರವಾಗಿದೆ. ಚಟ ಬಿಡಿಸುವ ಕೇಂದ್ರಗಳನ್ನು ನಾವು ಹೊಂದಿದ್ದೇವೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನಾವು ವಿವಿಧ ರಾಜ್ಯಗಳಲ್ಲಿ ನಡೆಸುತ್ತಿದ್ದಾರೆ. ತರಬೇತಿ ನರ್ಸ್ ಗಳು, ವೈದ್ಯರ ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.