ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ವಿ.ಶ್ರೀನಿಧಿ, ಕರಡು ಜಾಹೀರಾತು ನೀತಿಗೆ ಹಲವು ಆಕ್ಷೇಪಣೆಗಳು ಬಂದಿದ್ದವು. ಈ ಕುರಿತು ಸಾರ್ವಜನಿಕ ವಿಚಾರಣೆಯೂ ನಡೆಸಲಾಗಿದ್ದು, 250 ಮಂದಿ ಪಾಲ್ಗೊಂಡಿದ್ದರು. ಅಲ್ಲಿ ಕೆಲವು ಆಕ್ಷೇಪಣೆ ಮತ್ತು ಸಲಹೆಗಳು ಬಂದಿದ್ದು, ಅವುಗಳನ್ನು ಪರಿಗಣಿಸಲಾಗಿದೆ. ಶೀಘ್ರವೇ ಜಾಹೀರಾತು ನೀತಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.