ವಿಷಾಹಾರ ಸೇವನೆ: ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ!

ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ನಡುವೆ ಮೈಸೂರಿನ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ...
ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ
ಮೈಸೂರಿನ ಆಸ್ಪತ್ರೆಯಲ್ಲಿ 30ಮಂದಿ ಜೀವನ್ಮರಣದ ನಡುವೆ ಹೋರಾಟ
Updated on
ಮೈಸೂರು: ಚಾಮರಾಜನಗರ ವಿಷ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ನಡುವೆ ಮೈಸೂರಿನ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ರೀತಿ ಸಂಭವಿಸಬಹುದೆಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ, ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಬಯಸಿದ್ದ, ಆತನಿಗೆ ಈ ರೀತಿ ಸಾವು ಬರುತ್ತದೆಂದು ನಾವು ಎಣಿಸಿರಲಿಲ್ಲ ಎಂದು ಶುಕ್ರವಾರ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಮೃತರಾದ ಕೃಷ್ಣ ನಾಯ್ಕ ಅವರ ಭಾವಮೈದುನ ಎಂಜಿ ನಾಯಕ್ ತಿಳಿಸಿದ್ದಾರೆ.
ಕೃಷ್ಣ ನಾಯಕ್ ಪತ್ನಿ ಬಿಲ್ಲಿ ಬಾಯ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮತ್ತು ಮಗಳು ಪ್ರಿಯ ಬಾಯ್ ಅವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ,. 
ಮಿಲ್ಲಿ ಬಾಯ್ ಸ್ಥಿತಿ ಚಿಂತಾಜನಕವಾಗಿದೆ, 48 ಗಂಟೆಗಳ ಕಾಲ ಯಾವುದನ್ನು ಹೇಳಲು ಸಾಧ್ಯವಿಲ್ಲ , ಇದೇ ದೇವಾಲಯದಲ್ಲಿ ಹಲವು ಮಂದಿಯನ್ನು ಕಳೆದುಕೊಂಡಿದ್ದೇವೆ ಎಂದು ಮಿಲ್ಲಿ ಬಾಯ್ ಸಂಬಂಧಿ ಗೌರಿ ಹೇಳಿದ್ದಾರೆ.
ಮಿಲ್ಲಿ ಬಾಯ್ 2ನೇ ಮಗಳು ರಾಣಿ ಬಾಯ್ ಪದವಿ ವಿದ್ಯಾರ್ಥಿನಿ, ಮೈಸೂರಿನಲ್ಲಿದ್ದ ಕಾರಣ ಆಕೆ ಬಚಾವಾಗಿದ್ದಾಳೆ
ಮೈಸೂರಿನಲ್ಲಿ ಒಟ್ಟು  104 ಮಂದಿ ರೋಗಿಗಳು ದಾಖಲಾಗಿದ್ದು, ಅದರಲ್ಲಿ 30 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com