ನಿನ್ನೆ ಸಂಜೆ ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್'ಗೆ ಕಾಯದೆ ರಾಜ್ಯದ ಬಜೆಟ್'ನ್ನು ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ಮಂಡನೆ ಮಾಡಲಾಗುತ್ತದೆ. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರದ ಭರವಸೆಯಂತೆ ರೂ, 17 ಲಕ್ಷ ರೈತರ ತಲಾ ರೂ.50 ಸಾವಿರ ಕೃಷಿ ಸಾಲದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ 10 ದಿನಗಳಲ್ಲಿ ಪಾವತಿ ಮಾಡಲಾಗುವುದು. ಜೊತೆಗೆ ಅಷ್ಟೂ ಮಂದಿಗೆ ಸರ್ಕಾರದ ವತಿಯಿಂದಲೇ ಋಣಮುಕ್ತ ಪ್ರಮಾಣಪತ್ರ ವಿತರಿಸಲಾಗುವುದು. ಉಳಿದ ರೂ.1.5 ಲಕ್ಷ ಬಾಕಿ ಹಣವನ್ನು ಮುಂದಿನ ಬಜೆಟ್ ನಲ್ಲಿ 2 ಕಂತುಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.