ಇದಾದ ನಂತರ ತನ್ನ ಪತ್ನಿ ಮೊಬೈಲ್ ನಲ್ಲಿ ಕರೆ ಮಾಡಿ ಯಾರಿಗೋ ಜಗಳದ ವಿಷಯ ತಿಳಿಸುತ್ತಿದ್ದಳು, ಇದನ್ನು ಪ್ರಶ್ನಿಸಿದ ನಾನು ಮನೆ ವಿಷಯ ಮೂರನೇಯವರಿಗೆ ಯಾಕೆ ತಿಳಿಸುತ್ತೀಯಾ ಎಂದು ಪ್ರಶ್ನಿಸಿದೆ. ಜೊತೆಗೆ ಯಾರ ಬಳಿ ವಿಷಯ ಹೇಳುತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಆಕೆಯ ಮೊಬೈಲ್ ನೋಡಲು ಪ್ರಯತ್ನಿಸಿದೆ, ಈ ವೇಳೆ ಆಕೆ ನನ್ನನ್ನು ಬೈಯು ಕೈ ಹಿಡಿದು ಕೊಂಡು ಗಟ್ಟಿಯಾಗಿ ಕಚ್ಚಿದ್ದಾಳೆ ಎಂದು ವಿಶ್ವಾಸ್ ಆರ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ವಿಶ್ವಾಸ್ ಆರ್ಯ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.