ಕಳೆದ ನವೆಂಬರ್ 30ರಂದು ಈ ಘಟನೆ ನಡೆದಿದ್ದು ಸದ್ಯ ವಿಡಿಯೋ ವೈರಲ್ ಆದ ಬಳಿಕ ಸುದ್ದಿ ಮುನ್ನಲೆಗೆ ಬಂದಿದೆ. ಯಶವಂತಪುರದಿಂದ ಬನಶಂಕರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಒನ್ ವೇಯಲ್ಲಿ ಬರುತ್ತಿದ್ದುದ್ದನ್ನು ಕಂಡ ಬೈಕ್ ಸವಾರ ಬಸ್ ಅನ್ನು ತಡೆದಿದ್ದಾನೆ. ನಂತರ ಬಸ್ ನ ನಿರ್ವಾಹಕ ಬಂದು ಜಾಗ ಬಿಡುವಂತೆ ಕೇಳಿದ್ದಾನೆ. ಆದರೆ ಸವಾರ ನೀವು ರಾಂಕ್ ರೂಟ್ ನಲ್ಲಿ ಬರುತ್ತಿದ್ದೀರಾ ನೀವೆ ಹಿಂದಕ್ಕೆ ಹೋಗಿ ಎಂದು ಹೇಳಿದ್ದಾನೆ.