ಈ ಕುರಿತಂತೆ ಮಾತನಾಡಿರುವ ಅವರು, ರಾಜ್ಯದ ವಿಶೇಷ ತನಿಖಾ ದಳ (ಎಸ್ಐಟಿ) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ತನಿಖೆ ಉತ್ತಮವಾಗಿ ಸಾಗುತ್ತಿದೆ. ಈವರೆಗೂ 16 ಮಂದಿ ಶಂಕಿತರನ್ನೂ ಬಂಧಿಸಿದ್ದಾರೆ. ಅಲ್ಲದೆ, 2 ಚಾರ್ಜ್ ಶೀಟ್ ಗಳನ್ನೂ ಕೂಡ ದಾಖಲಿಸಿದೆ. ತನಿಖೆ ಉತ್ತಮವಾಗಿ ಸಾಗುತ್ತಿರುವಾಗ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.