ಮಂಡ್ಯ ಜಿಲ್ಲ ಶ್ರೀರಂಗಪಟ್ಟಣದ ತಾಲೂಕಿನಲ್ಲಿರುವ ಕೆಆರ್'ಎಸ್ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಹಿನ್ನೀರು ಸೇರಿದಂತೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಯಾವುದೇ ವಾಹನ ಓಡಾಡಲು, ಮೋಜು-ಮಸ್ತಿ ಮಾಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಜಲಾಯಶಕ್ಕೆ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ. ಆದರೂ ಉದ್ಯಮಿಯೊಬ್ಬರು ಈ ರೀತಿ ಹಿನ್ನೀರಿನಲ್ಲಿ ಕಾರು ಜಲಾಯಿಸಲು ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.