ಬೆಂಗಳೂರಿನಲ್ಲಿ ಮತ್ತೆ ಮ್ಯಾನ್ ಹೋಲ್ ದುರಂತ: ಇಬ್ಬರು ಕಾರ್ಮಿಕರ ಸಾವು

ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ...
ಮ್ಯಾನ್ ಹೋಲ್
ಮ್ಯಾನ್ ಹೋಲ್
ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. 
ನಗರದ ಎಇಸಿಎಸ್ ಲೇಔಟ್ ನಲ್ಲಿರುವ ವಾಣಿಜ್ಯ ಮಳಿಗೆ ಚರಂಡಿ ಸ್ವಚ್ಛಗೊಳಿಸಿಲು ಬಂದಿದ್ದ ಕಾರ್ಮಿಕರಾದ 35 ವರ್ಷದ ರಾಮು ಮತ್ತು 28 ವರ್ಷದ ರವಿ ಮೃತಪಟ್ಟಿದ್ದಾರೆ.
ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಒಳಗೆ ಸಿಲುಕಿ ಉಸಿರಾಡಲು ಸಾಧ್ಯವಾಗದೇ ಇಬ್ಬರು ಒಳಗೆ ಮೃತಪಟ್ಟಿದ್ದಾರೆ. ರಾಮು ಮ್ಯಾನ್ ಹೋಲ್ ಕ್ಲೀನ್ ಮಾಡಲು ಒಳಗೆ ಇಳಿದಿದ್ದರು ಈ ವೇಳೆ ಉಸಿರುಗಟ್ಟಿ ಕೂಗಾಡಿದ್ದಾರೆ. ಆಗ ರಾಮು ನನ್ನು ರಕ್ಷಣೆ ಮಾಡಲು ಮ್ಯಾನ್ ಹೋಲ್ ಗೆ ರವಿ ಸಹ ಇಳಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. 
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಇಬ್ಬರ ಶವಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com