ಭಾಸ್ಕರ್ ಎಂಬಾತ ಬೆಳಗ್ಗೆ 11.30ರ ವೇಳೆಗೆ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಕಾಣಿಸಿಕೊಂಡಿದ್ದಾನೆ, ಆತನನ್ನು ಪೊಲೀಸರು ಪ್ರಶ್ನಿಸಿದಾಗ ತಾನು ವಿಧಾನಸೌಧ ಸಿಬ್ಬಂದಿ ಎಂದು ಹೇಳಿಕೊಂಡು ಹೋಗಿದ್ದಾನೆ. ವಿಧಾನಸೌಧದ ಮೂರನೇ ಗೇಟ್ ಬಳಿ ಶ್ವಾನ ದಳ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಆತನ ಬಳಿ ಯಾವುದೇ ಗುರುತಿನ ಪತ್ರ ಇಲ್ಲದಿರುವುದು ತಿಳಿದು ಬಂದಿದೆ. ಹೀಗಾಗಿ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.