ತ್ಯಾಗಮೂರ್ತಿ ಬಾಹುಬಲಿ ಮಹಾ ಮಜ್ಜನಕ್ಕೆ ಜೈನಕಾಶಿಯಲ್ಲಿ ಸಕಲ ಸಿದ್ಧತೆ

ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸತತ 9 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಮ್ಯಾರಥಾನ್ ಮಜ್ಜನಕ್ಕೆ ಜೈನಕಾಶಿಯಲ್ಲಿ ಸಕಲ ಪೂರ್ಣಗೊಂಡಿದೆ.
ಬಾಹುಬಲಿ ಮಹಾಮಜ್ಜನ
ಬಾಹುಬಲಿ ಮಹಾಮಜ್ಜನ
Updated on
ಹಾಸನ: ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸತತ 9 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಮ್ಯಾರಥಾನ್ ಮಜ್ಜನಕ್ಕೆ  ಜೈನಕಾಶಿಯಲ್ಲಿ ಸಕಲ ಪೂರ್ಣಗೊಂಡಿದೆ.
ಸತತ 9 ಗಂಟೆಗಳ ನಿರಂತರವಾಗಿ ನಡೆಯಲಿರುವ ಮಹಾಮಜ್ಜನದಲ್ಲಿ ಬಾಹುಬಲಿ ಮೂರ್ತಿಗೆ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳು, ಪವಿತ್ರ ಪೂಜಾ  ಸಾಮಗ್ರಿಗಳಿಂದ ಮಜ್ಜನ ನಡೆಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ 3.30ರವರೆಗೂ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಲಾಗುತ್ತಿದ್ದು, 3.30ರಿಂದ 5.30ರವರೆಗೂ ಅಮೃತಾಭಿಷೇಕ ಮಾಡಲಾಗುತ್ತದೆ ಎಂದು ಜೈನ  ಮುನಿಗಳು ತಿಳಿಸಿದ್ದಾರೆ.
ಬಳಿಕ ಕೆಲ ಪೂಜಾ ಕೈಂಕರ್ಯಗಳಿದ್ದು, ಬಳಿಕ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳಿಂಗ ಮಜ್ಜನ ಮಾಡಿಸಲಾಗುತ್ತದೆ. ಇನ್ನು ಈ ಮಹಾ ಮಜ್ಜನ ಸತತ 9 ಗಂಟೆಗಳ  ಕಾಲ ನಡೆಯಲಿದ್ದು, ಇದಕ್ಕಾಗಿ ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ವಿಂದ್ಯಗಿರಿಯಲ್ಲಿ ಮಹಾಮಜ್ಜನ ಕೈಂಕರ್ಯ ಆರಂಭವಾಗಿದೆ ಎಂದು ತಿಳಿದುಬಂದಿದೆ.  ಇದೇ ಮಹಾಮಜ್ಜನ ಕುರಿತು ಮಾಧ್ಯಮಗಳಿದೆ ಮಾಹಿತಿ ನೀಡಿರುವ ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಅವರು, ಇಂದು ಒಟ್ಟು 108 ಕಳಶಗಳ ಮೂಲಕ ಅಭಿಷೇಕ ನೆರವೇರಿಸಲಾಗುತ್ತಿದೆ. 
ಈ 108 ಕಳಶಗಳಲ್ಲಿ ನೀರು, ಹಾಲು, ಕೇಸರಿ, ಅರಿಶಿನ, ಕಬ್ಬಿನ ರಸ, ಅಕ್ಕಿ ಹಿಟ್ಟು, ಶ್ರೀಗಂಧ, ಮೊಸರು, ಅಷ್ಟಗಂಧ, ಚತುರ್ ಕಳಸ, ಗಿಡ ಮೂಲಿಕೆ ದ್ರವಗಳು ಸೇರಿದಂತೆ ವಿವಿಧ ಬಗೆಯ ಪವಿತ್ರ ವಸ್ತುಗಳನ್ನು ಸೇರಿಸಲಾಗಿರುತ್ತದೆ.   ಸಂಜೆ 6 ಗಂಟೆಗೆ ನಡೆಯುವ ಮಹಾ ಮಂಗಳಾರತಿ ಮೂಲಕ ಇಂದಿನ ಮಹಾಮಜ್ಜನ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಸಂಜೆ 6.30ರಿಂದ ರಾತ್ರಿ 9.30 ರವರೆಗೂ ಜೈನ ಮುನಿಗಳು ಹಾಗೂ ಭಕ್ತರು ವಿವಿಧ ಪೂಜೆಗಳಲ್ಲಿ  ತೊಡಗಲಿದ್ದಾರೆ. 
ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕೆಎಂಎಫ್ ನಿಂದ ಸುಮಾರು 600 ಲೀಟರ್ ಹಾಲು ತರಿಸಿಕೊಳ್ಳಲಾಗುತ್ತಿದೆ. ಇನ್ನು ಮಹಾಮಸ್ತಕಾಭಿಷೇಕಕ್ಕಾಗಿ ಚೆನ್ನರಾಯಪಟ್ಟಣ, ಅರಸೀಕೆರೆ, ತಿಪಟೂರು ಸೇರಿದಂತೆ ಸುತ್ತಮುತ್ತಲ ತೆಂಗು  ಬೆಳೆಗಾರರಿಂದೆ ಎಳನೀರು ತರಿಸಿಕೊಳ್ಳಲಾಗಿದೆ. ತುಮಕೂರು ಮೂಲದ ಭಕ್ತರರೊಬ್ಹರು ಮಹಾಮಜ್ಜನಕ್ಕೆ ಶ್ರವಣಬೆಳಗೊಳದ ಜೈನ ಮಠಕ್ಕೆ ಲಕ್ಷಾಂತರ ಮೌಲ್ಯದ ಕೇಸರಿಯನ್ನು ತರಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.  ಫೆಬ್ರವರಿ 7ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು  ಚಾಲನೆ ನೀಡಿದ್ದರು. ಫೆಬ್ರವರಿ 25ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com