ದಿನದ ಎಂಟು ಗಂಟೆ ಕೆಲಸಕ್ಕೆ `600 ರೂ. ವೇತನ ಸಿಗುವುದೆನ್ನುವ ಆಸೆಯಿಂದ ಇವರೆಲ್ಲಾ ಉತ್ತರ ಪ್ರದೇಶದ ಗೋರಖ್ ಪುರದಿಂದ ಬಂದಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಇವರಿಗೆ ವೇತನ ಪಾವತಿಯಾಗಿರಲಿಲ್ಲ. ಇದೀಗ ಕಾರ್ಮಿಕರು ಪುನಃ ತಮ್ಮ ಊರುಗಳನ್ನು ಸೇರಲು ರೈಲ್ವೆ ಟಿಕೆಟ್ ಸಹ ದೊರಕಿರುವುದಿಲ್ಲ. "ನಮಗೆ ಶಿಫಾರಸು ಮಾಡಲಾದ ಔಷಧಿಗಳನ್ನು ನೀಡುತ್ತಿಲ್ಲ, ಮನೆಗೆ ತೆರಳಲು ರೈಲು ಟಿಕೆಟ್ ಖರೀದಿಸಲು ಸಹ ನಮ್ಮಲ್ಲಿ ಹಣವಿಲ್ಲ. ನಾವು ನಮ್ಮ ಹಣವನ್ನೆಲ್ಲಾ ಕಳೆದುಕೊಂಡಿದ್ದೇವೆ.ನಮಗೆ ವೇತನ ಪಾವತಿಸ್ಲ್ಲ, ಸರಿಯಾದ ಔಷಧ ದೊರಕಿಲ್ಲ. ನಾವು ಪುನಃ ನಮ್ಮ ಹಳ್ಳಿಗಳಿಗೆ ತೆರಳುವುದಕ್ಕೆ ಬಯಸಿದ್ದೇವೆ" ಕಟ್ಟಡ ಕುಸಿತದ 12 ಗಂಟೆಗಳ ನಂತರ ಅವಶೇಷದಿಂದ ಹೊರಬಂದ ಪೇಂಟರ್ ಧೀರೇಂದ್ರ ಕುಮಾರ್ ಅವರ ಸ್ನೇಹಿತ ಜಿಮ್ಲೆಶ್ ಪಾಸ್ವಾನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.