ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾಶಿವ ವರದಿ ಪರ ಹಾಗೂ ವಿರುದ್ಧ ಇರುವ ಪರಿಶಿಷ್ಟ ಬಣಗಳ ನಾಯಕರೊಂದಿಗೆ ಸಮಾಲಾಚೋನೆ ನಡೆಸಿದ್ರು. ಈ ವೇಳೆ, ರಾಜ್ಯ ಸರ್ಕಾರ ಎಜೆ. ಸದಾಶಿವ ವರದಿ ಜಾರಿ ಕುರಿತು ಕಾನೂನು ಅಭಿಪ್ರಾಯದ ಮೊರೆಹೋಗಿದೆ. ಕಾನೂನು ಇಲಾಖೆ ಹಾಗೂ ಅಡ್ವೋಕೇಟ್ ಜನರಲ್ ವರದಿ ಬಂದ ಬಳಿಕ ಮತ್ತೊಮ್ಮೆ ಜನಪ್ರತಿನಿಧಿಗಳು ಹಾಗೂ ದಲಿತ ಸಂಘಟನೆಗಳ ಪ್ರತ್ಯೇಕ ಸಭೆ ನಡೆಸಲಾಗುತ್ತದೆ. ಕಾನೂನು ಇಲಾಖೆ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಯಾವುದೇ ರೀತಿಯ ಹೋರಾಟ ನಡೆಸದಂತೆ ಹಾಗೂ ಹೇಳಿಕೆಗಳನ್ನು ನೀಡದಂತೆ ಮನವೊಲಿಸಿದರು.