ಯಾದಗಿರಿ : ಯಾದಗಿರಿ ಜಿಲ್ಲೆಯ ಚೆಲೇರಿ ಗ್ರಾಮದ ವ್ಯಾಪ್ತಿಯಲ್ಲಿ ತೆಲಂಗಾಣ ಸರ್ಕಾರ ಅಕ್ರಮ ಮರಳುಗಾರಿಕೆ ನಡೆಸಿದ್ದು ಇದು ಎರಡು ರಾಜ್ಯಗಳ ನಡುವೆ ಹೊಸ ಗಡಿ ಸಮಸ್ಯೆಗೆ ಕಾರಣವಾಗಿದೆ. ಕರ್ನಾಟಕದ ಅಧಿಕಾರಿಗಳು ಹೇಳುವಂತೆ ಈ ಗ್ರಾಮ ಕರ್ನಾಟಕದ ವ್ಯಾಪ್ತಿಗೆ ಸೇರಿದೆ. ಆದರೆ ಕರ್ನಾಟಕದ 47 ಎಕರೆ ಭೂಮಿ, ತಮಗೆ ಸೇರಿದ್ದು, ಅಲ್ಲಿನ ಕೆಲ್ರೆಯ ಭಾಗ ಸಂಪೂರ್ಣವಾಗಿ ತೆಲಂಗಾಣಕ್ಕೆ ಸೇರಿದೆ ಎನ್ನುವ ಮೂಲಕ ಅಲ್ಲಿನ ಹಳ್ಳ ಹಾಗೂ ಗ್ರಾಮದ ಭಾಗಗಳ ಮೇಲೆ ತನ್ನ ಹಿಡಿತ ಸಾಧಿಸಲು ತೆಲಂಗಾಣ ಸರ್ಕಾರ ಪ್ರಯತ್ನ ನಡೆಸಿದೆ.