"ಕರೆಯ ಕಾರಣ ನಾವು ಸ್ಥಳಕ್ಕೆ ತೆರಳಿದ್ದೆವು. ನಾವು ಅಲ್ಲಿಗೆ ತೆರಳುವ ಸಮಯ ಆರೋಪಿಗಳು ಕಾರ್ ತೆಗೆದುಕೊಂಡು ಹೊರಟಿದ್ದರು. ನಾವು ಕಾರ್ ಅಡ್ಡಗಟ್ಟಿದಾಗ ಅವರು ನಮ್ಮ ಬೈಕ್ ಗೆ ಡಿಕ್ಕಿ ಹೊಡೆದರು, ಕಾರಿನಿಂದಿಳಿದ ಅವರು ನಮಗೆ ಅವಾಚ್ಯ ಶಬ್ದದಿಂಡ ನಿಂದಿಸಿದರು. ನಾವು ಕಾರ್ ಚಾಲನೆ ಕುರಿತು ಪ್ರಶ್ನಿಸಿದಾಗ ಯುವತಿ ನನ್ನ ಕೆನ್ನೆಗೆ ಹೊಡೆದಿದ್ದಾಳೆ, ಅವಳ ಜತೆಗಿದ್ದ ಯುವಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಗಮಿಸಿದ ಹೊಯ್ಸಳ ಸಿಬ್ಬಂದಿಗಳ ಮೇಲೆಯೂ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ, ಸಮವಸ್ತ್ರ ಹರಿದು ಹಾಕಿದ್ದಾರೆ. ಕಡೆಗೂ ಹೆಚ್ಚಿನ ಸಿಬ್ಬಂದಿಗಳನ್ನು ಕರೆಸಿಕೊಂಡು ಆರೋಪಿಗಳನ್ನು ಠಾಣೆಗೆ ಕರೆದೊಯ್ಯಲಾಗಿದೆ" ಶಿರೋಳ ತಮ್ಮ ದೂರಿನಲ್ಲಿ ತಿಳಿದ್ದಾರೆ. ಸದ್ಯ ಮೂವರು ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ, ಕರ್ತವ್ಯಕ್ಕೆ ಅಡ್ಡಿ, ಸರ್ಕಾರಿ ನೌಕರರ ಮೇಲೆ ಹಲ್ಲೆ ಆರೋಪಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.