ಹುತಾತ್ಮ ಯೋಧ ಬಸವಣ್ಣ ಅವರ ಸಹೋದರ ರಾಮಕೃಷ್ಣ ಎಂಬುವವರು ಸರ್ಕಾರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಪುತ್ಥಳಿ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಪುತ್ಥಳಿ ನಿರ್ಮಾಣಕ್ಕಾಗಿ ಗೆಳೆಯರು, ಸಂಬಂಧಿಕರಿಂದ ಹಲವು ವರ್ಷಗಳಿಂದ ಹಣವನ್ನು ಸಂಗ್ರಹಿಸಿದ ರಾಮಕೃಷ್ಣ ಅವರು ರೂ.2.45 ಲಕ್ಷ ಹಣವನ್ನು ಸಂಗ್ರಹಿಸಿದ್ದರು. ಇದರಂತೆ ಮೈಸೂರು ಮೂಲಕ ಶಿಲ್ಪಿ ಅರುಣ್ ಎಂಬುವವರಿಂದ 45 ದಿನಗಳ ಕಾಲ ಪುತ್ಥಳಿಯನ್ನು ಕೆತ್ತಿಸಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ಪುತ್ಥಳಿಯನ್ನು ಸ್ಥಾಪನೆ ಮಾಡಲು ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಸಾಕಷ್ಟು ಹೋರಾಟ, ಶ್ರಮದ ಬಳಿಕ ಸರ್ಕಾರ ಅನುಮತಿ ನೀಡಿದ ಹಿನ್ನಲೆಯಲ್ಲಿ ಇದೀಗ ಪುತ್ಥಳಿಯನ್ನು ಶಾಲಾ ಆವರಣದಲ್ಲಿ ಸ್ಥಾಪನೆ ಮಾಡಿದ್ದಾರೆ.