ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದ ಜನರು ಹಲವು ಶತಮಾನಗಳಿಂದಲೂ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಸಂಗ್ಲಿ, ಅಕ್ಕಲ್ಕೋಟ್ ಮತ್ತು ಝಾಟ್ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳ ಕನ್ನಡ ಪುಸ್ತಕದಲ್ಲಿ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ಒಂದು ಅಧ್ಯಯನವಿದೆ. ಬೆಳಗಾವಿ ಹಾಗೂ ಕೊಲ್ಹಾಪುರದ ಸಹಕಾರಿ ವಲಯದಲ್ಲಿ ಉತ್ತಮ ಸಂಬಂಧಗಳಿವೆ. ಆದರೆ, ಕೆಲ ರಾಜಕಾರಣಿಗಳಿಂದಾಗಿ ಗಡಿ ವಿಚಾರ ಬೆಳಗಾವಿಯ ಅಭಿವೃದ್ಧಿಗೆ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.