ನರಸಿಂಹರಾಜುವಿಗೆ ಸೇರಿದ ಟಾಟಾ ಸುಮೋ ವಾಹನದಲ್ಲಿ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ನಗರದ ಇತರ ಭಾಗಗಳ ಸೂಪರ್ ಮಾರ್ಕೆಟ್ ಗಳು, ಮಾಲ್ ಗಳು ಮತ್ತು ಇತರೆ ವ್ಯಾಪಾರ ಕೇಂದ್ರಗಳಿಂದ ಹಣ ಸಂಗ್ರಹಣೆ ಮಾಡಲಾಗುತ್ತಿತ್ತು. ಇದರಲ್ಲಿ ನಾರಾಯಣಸ್ವಾಮಿ ಎನ್ನುವವನು ಸಹಾಯಕನಾಗಿದ್ದು ಚಾಲಕ ನರಸಿಂಹರಾಜು, ಇನ್ನೋರ್ವ ಸಿಬ್ಬಂದಿ ನಟರಾಜ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ಸಂಜೆ 4.45ರ ಸುಮಾರು ಜ್ಞಾನಭಾರತಿ ವೃತ್ತದ ಬಳಿ ವ್ಯಾನ್ ನಿಲ್ಲಿಸಿದ ನಾರಾಯಣಸ್ವಾಮಿ ಮತ್ತು ನರಸಿಂಹರಾಜು ಭದ್ರತಾ ಸಿಬ್ಬಂದಿ ನಟರಾಜ್ ಗೆ ಹತ್ತಿರದ ಅಂಗಡಿಯೊಂದರಿಂದ ಬಾಳೆ ಹಣ್ಣುಗಳನ್ನು ತರ ಹೇಳಿದ್ದಾರೆ. ಆತ ಬಾಳೆಹಣ್ಣು ಖರೀದಿಸಿ ಹಿಂತಿರುಗುವಷ್ಟರಲ್ಲಿ ಇಬ್ಬರೂ ಹಣದ ಸಮೇತ ಪರಾರಿಯಾಗಿದ್ದಾರೆ ಎಂದು ಪೋಲೀಸರು ತಿಳಿಸಿದರು.