ನಾನು ಶ್ರೀಮಂತ ವ್ಯಕ್ತಿಯಲ್ಲ. ಸಾಮಾನ್ಯ ವಕೀಲನಷ್ಟೇ. ಉತ್ತಮವಾಗಿ ನಡೆದುಕೊಂಡ ಕಾರಣ ಗೌರವಯುತವಾಗಿ ನಾನು ಇವರಿಗೆ ಬಹುಮಾನವನ್ನು ನೀಡುತ್ತಿದ್ದೇನೆ. ಪತ್ರದ ಮೂಲಕ ನಾನು ಯಾವುದೇ ಪ್ರಚಾರವನ್ನೂ ಬಯಸುತ್ತಿಲ್ಲ. ಹತ್ಯೆ ಪ್ರಕರಣಗಳಲ್ಲಿ ಅವರ ತಲೆ, ಮೂರು, ಕಿವಿ, ನಾಲಿಗೆ ಕಿತ್ತು ಹಾಕಿದರೆ ಇನಾಮು ನೀಡುತ್ತೇವೆಂದು ಕೆಲವರು ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಸೃಷ್ಟಿಸುತ್ತಾರೆ. ದ್ವೇಷವನ್ನು ಹರಡುವ ಇಂತಹ ಕ್ರಿಮಿನಲ್ ಗಳಿಗೆ ಉತ್ತರವಾಗಿ ನಾನು ಸಹಾಯವನ್ನು ಮಾಡುತ್ತಿದ್ದೇನೆ, ಮಾನವತಾವಾದಿಗೆ ಹಾಗೂ ಜಾತ್ಯಾತೀತಕ್ಕೆ ಬೆಂಬಲ ನೀಡುತ್ತಿದ್ದೇನೆಂದು ತಿಳಿಸಿದ್ದಾರೆ.