ವಾಸ್ತುಪ್ರಕಾರ ಗುದ್ದಲಿ ಪೂಜೆ ಮಾಡದ ಅರ್ಚಕರಿಗೆ ರೇವಣ್ಣ ಪೂಜೆ!

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ವಾಸ್ತು ಪ್ರಕಾರ ಪೂಜೆ ಮಾಡದ ಅರ್ಚಕರಿಗೆ ಮಂಗಳಾರತಿ...
ಅರ್ಚಕರಿಗೆ ರೇವಣ್ಣ ಮಂಗಳಾರತಿ
ಅರ್ಚಕರಿಗೆ ರೇವಣ್ಣ ಮಂಗಳಾರತಿ
ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ವಾಸ್ತು ಪ್ರಕಾರ ಪೂಜೆ ಮಾಡದ ಅರ್ಚಕರಿಗೆ ಮಂಗಳಾರತಿ ಮಾಡಿದ ಘಟನೆ ಸೋಮವಾರ ನೆಡೆದಿದೆ. 
ಇಂದು ಹಾಸನ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಶಂಕು ಸ್ಥಾಪನೆಗೆ ಆಮಿಸಿದ್ದ ಸಚಿವರು, ಗುದ್ದಲಿ ಪೂಜೆ ಮಾಡುವಾಗ ಯಾವ ಕಡೆ ಪಾಯ ತೆಗಿಬೇಕು ಅಂತ ಗೊಲ್ಲಿ. ಯಾರ್ರೀ ಈ ಅನನುಭವಿ ಅರ್ಚಕರನ್ನು ಕರೆಸಿದ್ದು..? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುದ್ದಲಿ ಪೊಜೆ ವೇಳೆ ಯಾವ ದಿಕ್ಕಿಗೆ ಪಾಯ ತೆಗಿಸಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ಅನುಭವಿ ಅರ್ಚಕರನ್ನು ಕರೆಸುವುದನ್ನು ಬಿಟ್ಟು ಇವರನ್ನು ಯಾಕ್ರೀ ಕರೆಸಿದ್ದಿರಿ‌ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವರು ಗರಂ ಆಗುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿಗಳು, ಕೊನೆಗೆ ಗುದ್ದಲಿ ಪೊಜೆ ಮಾಡುವ ದಿಕ್ಕನ್ನು ಬದಲಿಸಿ ಕಾರ್ಯಕ್ರಮ ಮುಂದುವರೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com