ಮೂಲಗಳ ಪ್ರಕಾರ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ನಿನ್ನೆ ತಡರಾತ್ರಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿರುವ ತನ್ನ ಮನೆಗೆ ಆಗಮಿಸಿದ್ದಾಗ ಆತನನ್ನು ಬಂಧಿಸಲಾಗಿದೆ. ಮಹಾದೇವ್ ಸಾಹುಕಾರ್ ಆಗಮನದ ಕುರಿತು ಖಚಿತ ಮಾಹಿತಿ ಪಡೆದಿದ್ದ ಚಡಚಣ ಪೊಲೀಸರು ಆತನ ಆಗಮನವಾಗುತ್ತಿದ್ದಂತೆಯೇ ಬಂಧಿಸಿದ್ದಾರೆ.