ಇದೊಂದು ಅತ್ಯಂತ ವಿರಳ ತೀರ್ಪು ಎಂದೇ ಹೇಳಬಹುದು. ಕರ್ನಾಟಕದಲ್ಲಿ ಇಷ್ಟು ವೇಗವಾಗಿ ಬಂದಿರುವ ತೀರ್ಪನ್ನು ನಾನೆಂದೂ ನೋಡಿಯೇ ಇಲ್ಲ. ಪೊಲೀಸರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ತ್ವರಿತಗತಿಯಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಇದರಿಂದ ನ್ಯಾಯಾಲಯ ತ್ವರಿತಗತಿಯಲ್ಲಿ ಆದೇಶ ನೀಡಿದೆ ಎಂದು ಚಿತ್ರದುರ್ಗ ಎಸ್'ಪಿ ಶ್ರೀನಾಥ್ ಎಂ ಜೋಶಿಯವರು ಹೇಳಿದ್ದಾರೆ.