ಗಂಗಾಧರ್ ಚಡಚಣ ಹತ್ಯೆ ಪ್ರಕರಣ: ಸಿಐಡಿಯಿಂದ ಮತ್ತೊಬ್ಬ ಆರೋಪಿ ಬಂಧನ

ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ್ ಸಾಹುಕರ್ ಬ್ಯಾರಗೊಂಡ ಬಂಧನದ ನಂತರ ತ ಶಿವಾನಂದ ಬಿರಾದರ್ ಅವರನ್ನು ಸಿಐಡಿ ಪೊಲೀಸರು ಇಂದು ಬಂಧಿಸಿದ್ದಾರೆ.
ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಪೊಲೀಸರಿಂದ ಮಾಹಿತಿ ಸಂಗ್ರಹ
ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಪೊಲೀಸರಿಂದ ಮಾಹಿತಿ ಸಂಗ್ರಹ
ವಿಜಯಪುರ: ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ್ ಸಾಹುಕರ್ ಬ್ಯಾರಗೊಂಡ ಬಂಧನದ ನಂತರ ಇತ್ತೀಚಿಗೆ ಪೊಲೀಸರು ಶೂಟೌಟ್ ಮಾಡಿದ  ರೌಡಿ ಶೀಟರ್ ಧರ್ಮರಾಜ್  ಚಡಚಣ ಆಪ್ತ ಶಿವಾನಂದ ಬಿರಾದರ್ ಅವರನ್ನು  ಸಿಐಡಿ  ಪೊಲೀಸರು  ಬಂಧಿಸಿದ್ದಾರೆ.
ಚಡಚಣ ಪೊಲೀಸ್ ಠಾಣೆಯ ಮೂವರು ಪೊಲೀಸ್ ಕಾನ್ಸ್ ಟೇಬಲ್ ರನ್ನು  ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧದ ಕೇಸ್ ನಲ್ಲಿ ಮೂವರು ಬ್ಯಾರಾಗೊಂಡ ಅವರಿಗೆ ಆಪ್ತರಾಗಿದ್ದಾರೆ.
ಜೂನ್ 16 ರಂದು ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ನಂತರ ಎಲ್ಲಾ ಆರೋಪಿಗಳನ್ನು ಸಿಐಡಿ ತನಿಖೆಗೊಳಪಡಿಸಿದೆ. ಪ್ರಮುಖ ಆರೋಪಿ ಬ್ಯಾರಾಗೊಂಡನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com