ನಕ್ಸಲ್‌ರಿಂದ ನೆಲಬಾಂಬ್ ಸ್ಫೋಟ: ರಾಜ್ಯದ ಇಬ್ಬರು ಯೋಧರು ಹುತಾತ್ಮ!

ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ನೆಲ ಬಾಂಬ್ ಸ್ಫೋಟದಲ್ಲಿ ಕರ್ನಾಟಕ ಮೂಲದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಯ್‌ಪುರ: ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ನೆಲ ಬಾಂಬ್ ಸ್ಫೋಟದಲ್ಲಿ ಕರ್ನಾಟಕ ಮೂಲದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. 
ನಕ್ಸಲ್ ಹಾವಳಿ ಹೆಚ್ಚಾಗಿರುವ ತಡಬೌಲಿ ಗ್ರಾಮ ಸಮೀಪದ ಅರಣ್ಯದಲ್ಲಿ ಸೋಮವಾರ ಸಂಜೆ ಬೈಕ್ ನಲ್ಲಿ ಗಸ್ತು ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು ಇದರಲ್ಲಿ ಯೋಧರಾದ ಸಂತೋಷ್ ಲಕ್ಷ್ಮಣ್ ಮತ್ತು ವಿಜಯಾನಂದ ನಾಯಕ್ ಹುತಾತ್ಮರಾಗಿದ್ದಾರೆ. 
ಬಿಎಸ್ಎಫ್ ನ 121ನೇ ಬೆಟಾಲಿಯನ್ ನ ಯೋಧರ ಬೈಕ್ ಗಸ್ತು ತಂಡವನ್ನು ಗುರಿಯಾಗಿಸಿಕೊಂಡು ನಕ್ಸಲರು ಸ್ಫೋಟ ನಡೆಸಿದ್ದರು. ಸ್ಫೋಟದ ರಭಸಕ್ಕೆ ಬೈಕ್ ಛಿದ್ರಗೊಂಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯೋಧರಿಬ್ಬರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com