ನಕ್ಸಲ್‌ರಿಂದ ನೆಲಬಾಂಬ್ ಸ್ಫೋಟ: ರಾಜ್ಯದ ಇಬ್ಬರು ಯೋಧರು ಹುತಾತ್ಮ!

ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ನೆಲ ಬಾಂಬ್ ಸ್ಫೋಟದಲ್ಲಿ ಕರ್ನಾಟಕ ಮೂಲದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ರಾಯ್‌ಪುರ: ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ನೆಲ ಬಾಂಬ್ ಸ್ಫೋಟದಲ್ಲಿ ಕರ್ನಾಟಕ ಮೂಲದ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. 
ನಕ್ಸಲ್ ಹಾವಳಿ ಹೆಚ್ಚಾಗಿರುವ ತಡಬೌಲಿ ಗ್ರಾಮ ಸಮೀಪದ ಅರಣ್ಯದಲ್ಲಿ ಸೋಮವಾರ ಸಂಜೆ ಬೈಕ್ ನಲ್ಲಿ ಗಸ್ತು ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು ಇದರಲ್ಲಿ ಯೋಧರಾದ ಸಂತೋಷ್ ಲಕ್ಷ್ಮಣ್ ಮತ್ತು ವಿಜಯಾನಂದ ನಾಯಕ್ ಹುತಾತ್ಮರಾಗಿದ್ದಾರೆ. 
ಬಿಎಸ್ಎಫ್ ನ 121ನೇ ಬೆಟಾಲಿಯನ್ ನ ಯೋಧರ ಬೈಕ್ ಗಸ್ತು ತಂಡವನ್ನು ಗುರಿಯಾಗಿಸಿಕೊಂಡು ನಕ್ಸಲರು ಸ್ಫೋಟ ನಡೆಸಿದ್ದರು. ಸ್ಫೋಟದ ರಭಸಕ್ಕೆ ಬೈಕ್ ಛಿದ್ರಗೊಂಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯೋಧರಿಬ್ಬರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com