ಅಧಿವೇಶನದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್'ನ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾದಕ ದ್ರವ್ಯ ಪಿಡುಗು ಇಡೀ ವಿಶ್ವದ ಸಮಸ್ಯೆಯಾಗಿದೆ. ಯುವ ಜನತೆ ಈ ಪಿಡುಗಿಗೆ ದೊಡ್ಡ ಪ್ರಮಾಮದಲ್ಲಿ ಬಲಿಯಾಗುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಆರಂಭದಲ್ಲಿ ಮಾಮೂಲಿ ಚಾಕೋಲೆಟ್ ನೀಡಿ ನಂತರದ ದಿನಗಳಲ್ಲಿ ಮತ್ತು ಬರುವ ಚಾಕೋಲೆಟ್ ನೀಡಿ ಮಾದಕ ದ್ರವ್ಯ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.