ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಸಬ್ ರಿಜಿಸ್ಟಾರ್ ಕಿಡ್ನಾಪ್, ದೂರು ದಾಖಲು

ಸಬ್ ರಿಜಿಸ್ಟಾರ್ (ಉಪನೋಂದಣಾಧಿಕಾರಿ) ಅಧಿಕಾರಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಸಬ್ ರಿಜಿಸ್ಟಾರ್ ಕಿಡ್ನಾಪ್, ದೂರು ದಾಖಲು
ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಸಬ್ ರಿಜಿಸ್ಟಾರ್ ಕಿಡ್ನಾಪ್, ದೂರು ದಾಖಲು
Updated on
ಬೆಂಗಳೂರು: ಸಬ್ ರಿಜಿಸ್ಟಾರ್ (ಉಪನೋಂದಣಾಧಿಕಾರಿ) ಅಧಿಕಾರಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಾಂತಿನಗರ ಉಪನೊಂದಣಾಧಿಕಾರಿ ಕಛೇರಿಯ ಹಿರಿಯ ಅಧಿಕಾರಿ ರಂಗಸ್ವಾಮಿ ಅವರನ್ನು ದುಷ್ಕರ್ಮಿಗಳು ಅಪಹರಿಸಿ ರಾತ್ರಿಯೆಲ್ಲಾ ಸುತ್ತಾಡಿಸಿದ್ದು ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.
ಕೆ.ಎಚ್. ರಸ್ತೆಯ ಪಾದಚಾರಿ ಮಾರ್ಗದಿಂದ ಅಧಿಕಾರಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದು ಅಫರಣಕಾರರ ಗುಂಪಿನಲ್ಲಿ ಹತ್ತು ಜನರಿದ್ದರೆಂದು ಹೇಳಲಾಗಿದೆ.
ಅಧಿಕಾರಿ ರಂಗಸ್ವಾಮಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದರು ಆ ಕಾರಣಕ್ಕಾಗಿ ಅವರನ್ನು ಅಪಹರಣ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು ಅಪಹರಣಕಾರರು ಅಧಿಕಾರಿಗೆ ಜನರಿಗೆ ಕಿರುಕುಳ ನೀಡಬಾರದೆಂದು ಎಚ್ಚರಿಕೆ ನಿಡಿದ್ದಾರೆ.
ಕಾರಿನಲ್ಲಿ ಅಪಹರಣ ಮಾಡಿದ್ದ ಗುಂಪು ಅಧಿಕಾರಿಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಲ್ಲದೆ ಕಾರಿನೊಳಗೆ ಜ್ಜೋರಾಗಿ ಮ್ಯೂಸಿಕ್ ಆಹಿಕಿ ಬೇರೆಯವರಿಗೆ ತಿಳಿಯದಂತೆ ಅಪಹರಣ ಮಾಡಲಾಗಿತ್ತು. ಜುಲೈ 5ರಂದು ಈ ಘಟನೆ ನಡೆದಿದ್ದು ಮರುದಿನ ಜುಲೈ 6ರಂದು ಅಧಿಕಾರಿಯು ವಿಲ್ಸನ್ ಗಾರ್ಡನ್ ಪೋಲೀಸರಿಗೆ ದೂರು ನೀಡಿದ್ದಾರೆ.
ಅಪಹರಣ ಕಾರರ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com