ನಿನ್ನೆ ಇಬ್ಬರೂ ಕಾವೇರಿ ನೀರು ಹರಿಯುವ ಮೇಕೆದಾಟುಗೆ ತೆರಳಿದ್ದರು. ಮೊದಲಿಗೆ ಸಮೀರ್ ರೆಹಮಾನ್ ಸೆಲ್ಫಿ ತಗೆದುಕೊಳ್ಳುವ ವೇಳೆ ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನ ರಕ್ಷಿಸಲು ಹೋದ ಭವಾನಿ ಶಂಕರ್ ಕೂಡ ನೀರುಪಾಲಾಗಿದ್ದಾನೆ. ಇಬ್ಬರಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಆದರೆ ನದಿ ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.