ಬೆಂಗಳೂರು: ಬಾಲಮಂದಿರದ ಕಿಟಕಿ ಮುರಿದು 9 ಬಾಲಾಪರಾಧಿಗಳು ಪರಾರಿ

ಮಡಿವಾಳದ ಬಾಲಮಂದಿರದಿಂದ 8 ಬಾಲಾಪರಾಧಿಗಳು ಪರಾರಿಯಾಗಿ ಆರು ತಿಂಗಳು ಕಳೆಯುವ ಮೊದಲೇ ಮತ್ತೆ 9 ಬಾಲಕರು ನಾಪತ್ತೆಯಾಗಿದ್ದಾರೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಮಡಿವಾಳದ ಬಾಲಮಂದಿರದಿಂದ  8 ಬಾಲಾಪರಾಧಿಗಳು ಪರಾರಿಯಾಗಿ ಆರು ತಿಂಗಳು ಕಳೆಯುವ ಮೊದಲೇ ಮತ್ತೆ 9 ಬಾಲಕರು ನಾಪತ್ತೆಯಾಗಿದ್ದಾರೆ. ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಬಾಲಪರಾಧಿ ಮಂದಿರದಿಂದ ನಾಪತ್ತೆಯಾಗಿದ್ದಾರೆ.
ತಮ್ಮ ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡಿದ್ದ  ಬಾಲಕರು ಕಿಟಕಿ ಮುರಿದು ಎಸ್ಕೇಪ್ ಆಗಿದ್ದಾರೆ. ಅನುಮಾನಗೊಂಡ ಕೇರ್ ಟೇಕರ್ ಬಾಗಿಲು ಮುರಿದು ಒಳಗೆ ಬಂದಾಗ ಪರಾರಿಯಾಗಿರುವುದು ತಿಳಿದು ಬಂದಿದೆ. ಕೂಡಲೇ ಮಂದಿರದ ಸಿಬ್ಬಂದಿ ಮಡಿವಾಳ ಪೊಲೀಸರಿಗೆ  ದೂರು ನೀಡಿದ್ದಾರೆ.
ಕಬ್ಬಿಣದ ರಾಡಿನಿಂದ ಕಿಟಕಿ ಮುರಿದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ, ನಾಪತ್ತೆಯಾಗಿರುವವರು ಸುಮಾರು 15ರಿಂದ 17 ವಯಸ್ಸಿನವರಾಗಿದ್ದಾರೆ, ಇದರಲ್ಲಿ ಇಬ್ಬರು ತುಮಕೂರು, ಒಬ್ಬ ಬೆಂಗಳೂರು ಗ್ರಾಮಾಂತರ ಹಾಗೂ ಉಳಿದ ಆರು ಬಾಲಕರು ಬೆಂಗಳೂರು ನಗರದವರಾಗಿದ್ದಾರೆ, ಈ ಸಂಬಂಧ ಇಲಾಖೆ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com