ಸರ್ಕಾರಿ ಕೆಲಸದ ಆಮಿಷವೊಡ್ಡಿ 60 ಲಕ್ಷ ರೂ. ವಂಚಿಸಿದ ಆರೋಪಿಯ ಬಂಧನ

ಸರ್ಕಾರಿ ಸೇವೆ ಸೇರಬೇಕೆಂದುಕೊಂಡಿದ್ದ ನಿರುದ್ಯೋಗಿಯೊಬ್ಬರಿಗೆ ಸಚಿವರೊಬ್ಬರ ವಿಭಾಗೀಯ ಅಧಿಕಾರಿಯಾಗಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸಿದ ಆರೋಪದ ಮೇರೆಗೆ 29 ವರ್ಷದ ವ್ಯಕ್ತಿಯೊಬ್ಬನನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರಿ ಸೇವೆ  ಸೇರಬೇಕೆಂದುಕೊಂಡಿದ್ದ ನಿರುದ್ಯೋಗಿಯೊಬ್ಬರಿಗೆ ಸಚಿವರೊಬ್ಬರ  ವಿಭಾಗೀಯ ಅಧಿಕಾರಿಯಾಗಿ ಕೆಲಸ ಕೊಡಿಸುವುದಾಗಿ   ಆಮಿಷವೊಡ್ಡಿ ವಂಚಿಸಿದ ಆರೋಪದ ಮೇರೆಗೆ 29 ವರ್ಷದ ವ್ಯಕ್ತಿಯೊಬ್ಬನನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಟಿ ಬಂಧಿತ ಆರೋಪಿ. ಈತ  10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಿರುದ್ಯೋಗಿಯಾಗಿದ್ದ.  ಈತನ ವಿರುದ್ಧ ಜುಲೈ 23 ರಂದು  ಕೋಲಾರ ಜಿಲ್ಲೆಯ ವೆಂಕಟೇಶ್   ದೂರು ದಾಖಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಮಂಜುನಾಥ್ ಮನೆಯಲ್ಲಿರುವಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com