ಸಚಿವಾಲಯದ ಸಿಬ್ಬಂದಿಗಳ ಆರ್ಥಿಕ ಅಧಿಕಾರ ಮೊಟಕುಗೊಳಿಸಿದ ಸ್ಪೀಕರ್!

ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಹಣಕಾಸಿನ ಅಧಿಕಾರವನ್ನು ಸ್ಪೀಕರ್ ರಮೇಶ್ ಕುಮಾರ್ ಮೊಟಕುಗೊಳಿಸಿದ್ದಾರೆ. ಶಾಸಕರ ಭವನದಲ್ಲಿ ವಿವಿಧ ...
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಹಣಕಾಸಿನ ಅಧಿಕಾರವನ್ನು ಸ್ಪೀಕರ್ ರಮೇಶ್ ಕುಮಾರ್ ಮೊಟಕುಗೊಳಿಸಿದ್ದಾರೆ. ಶಾಸಕರ ಭವನದಲ್ಲಿ ವಿವಿಧ ವಸ್ತುಗಳ ಖರೀದಿಯಲ್ಲಿ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ.
ಶಾಸಕರ ಭವನ ಮತ್ತು ವಿಧಾನಸಭೆ ಸಚಿವಾಲಯಗಳ ಸಂಬಂಧಿತ ಯಾವುದೇ ಖರೀದಿಗೆ ಮೊದಲು ಸ್ಪೀಕರ್ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ಈ ಮೊದಲು ಹಿಂದಿನ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಆದೇಶವನ್ನ ರಮೇಶ್ ಕುಮಾರ್ ಮೊಟಕುಗೊಳಿಸಿದ್ದಾರೆ. ವಿವಿಧ ಹಂತದಲ್ಲಿ ಹಣಕಾಸಿನ ಅಧಿಕಾರ ನೀಡಿದ್ದಾರೆ.
ಹಣ ಮತ್ತು ಅಧಿಕಾರದ ದುರುಪಯೋಗ ಕೇಳಿಬಂದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com