ಬೆಂಗಳೂರು: ವೈಯುಕ್ತಿಕ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್ ಕಲಾಪದ ಅವಧಿ ವ್ಯರ್ಥ ಮಾಡಬಾರದೆಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಇಂತಹಾ ಅರ್ಜಿ ಸಲ್ಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಒಂದು ವರ್ಗದ ಜನರ ಸೇವೆಗಾಗಿ, ವೈಯುಕ್ತಿಕ ಉದ್ದೇಶಗಳಿಗೆ ಪಿಐಎಲ್ ಗಳನ್ನು ಸಲ್ಲಿಸಬಾರದೆಂದು ಹೇಳಿದ್ದಾರೆ.