ಈ ಮಧ್ಯೆ ನಿನ್ನೆ ಸುರಿದ ಮಳೆಯಿಂದಾಗಿ 18 ಮರಗಳು ಬಿದ್ದಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರು ಬಂದಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಶಿವಾನಂದ ವೃತ್ತ, ಆನೇಪಾಳ್ಯ, ಬಿಟಿಎಸ್ ರಸ್ತೆ, ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, 43 ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಬಗ್ಗೆ ಬೆಸ್ಕಾಂನಲ್ಲಿ ದೂರು ದಾಖಲಾಗಿದೆ.