ನೈಸ್ ಸಂಸ್ಥೆಗಾಗಿನ ಪರಿಹಾರವನ್ನು ಯಾರಿಗೆ ಸಂದಾಯ ಮಾಡಬೇಕೆನ್ನುವುದು ಸ್ಪಷ್ಟವಿಲ್ಲ ಎಂದು ಬಿಎಂಆರ್ಸಿಎಲ್ ಹೇಳಿದೆ."ಸುಮಾರು ಎರಡು ಎಕರೆಗೆ ಮಾತ್ರ ಮಾರಾಟ ಪತ್ರವನ್ನು ನೈಸ್ ಹೊಂದಿದೆ. ಒಂದು ದಶಕಕ್ಕೂ ಮುಂಚೆಯೇ ಅದು ತನ್ನ ನೈಸ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಸುಮಾರು ಆರು ಎಕರೆ ಭೂಮಿಗೆ ನೈಸ್ ಸಂಸ್ಥೆ ಭೂಮಾಲಿಕರಿಗೆ ಇನ್ನೂ ಪರಿಹಾರ ನೀಡಿಲ್ಲ. ಕರ್ನಾಟಕದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಗೆ ಸಹ ಇನ್ನೂ ಪರಿಹಾರ ಮೊತ್ತ ಸಂದಾಯವಾಗಿಲ್ಲ. ಕೆಐಎಡಿಬಿ, ವಿಶೇಷ ಉಪ ಆಯುಕ್ತ (ಭೂ ಸ್ವಾಧೀನ) ಎಸ್.ಎನ್. ಬಾಲಚಂದರ್ ಅವರ ಪ್ರಕಾರ ಸಮಸ್ಯೆಯನ್ನು ಎರಡು ಮೂರು ವಾರಗಳಲ್ಲಿ ಪರಿಹರಿಸಲಾಗುತ್ತದೆ.