ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದು "ಜಿಗಣಿ ನಿವಾಸಿಯಾದ ಮುನಿರತ್ನಾ ತನ್ನ ಮಕ್ಕಳಾದ ಮೋಹಿತ್ ಹಾಗು ನಿತ್ಯಾ ಜತೆ ಮಂಗಳವಾರ 6 ಗಂಟೆ ಸುಮಾರಿಗೆ ಮಹಂತ ಲಿಂಗಪುರ ಕೆರೆಗೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮಾರ್ಗದಲ್ಲಿ ಸಂಚರಿಸುತ್ತಿದ್ದ ಗ್ರಾಮಸ್ಥರು ಮೂವರು ನೀರಲ್ಲಿ ಮುಳುಗುವುದನ್ನು ಕಂಡು ಕೆಲವರು ನೀರಿಗೆ ಹಾರಿ ಜೀವ ರಕ್ಷಣೆಗೆ ಮುಂದಾಗಿದ್ದಾರೆ.ಅವರು ತಾಯಿ ಮತ್ತು ಮಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು, ಆದರೆ ಒಂದು ವರ್ಷದ ಮಗು ಮೋಹಿತ್ ಸಾವನ್ನಪ್ಪಿದೆ" ಪೋಲೀಸರು ಮಾಹಿತಿ ನಿಡಿದ್ದಾರೆ.