"ಭಾರತ ಮುಂದುವರಿದ ರಾಷ್ಟ್ರವಾಗಬೇಕಾದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಬೇಕು. ಚೀನಾ ಅಮೆರಿಕಾವನ್ನು ಹಿಂದಿಕ್ಕಲು ಯೋಚಿಸುತ್ತಿದೆ, ನಾವೇಕೆ ಯೋಚಿಸಬಾರದು? ಭಾರತಕ್ಕೆ ಸ್ವಾತಂತ್ರ ಬಂದು ಇಷ್ಟು ವರ್ಷ ಕಳೆದರೂ ವಿಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡುತ್ತಿಲ್ಲ. ಸರ್ಕಾರ ಈ ವಲಯಕ್ಕೆ ಶೇ 0.9ರಷ್ಟು ಮಾತ್ರ ಹಣ ಮೀಸಲಾಗಿರಿಸುತ್ತದೆ ಎಂದರೆ ಅದು ಒಂದು ಶೇ. ಗೂ ಕಡಿಮೆ. ಇದರಲ್ಲಿ ಬಾಹ್ಯಾಕಾಶ, ಅಣುವಿಜ್ಞಾನ ವಲಯವೇ ಬಹುಪಾಲು ಹಣ ಪಡೆಯುತ್ತದೆ.ಭೌತವಿಜ್ಞಾನ, ರಸಾಯನಶಾಸ್ತ್ರ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಿಗೆ ಏನೂ ಸಿಗುತ್ತಿಲ್ಲ" ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.