ಬೆಂಗಳೂರು; ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆದಾಗ, ಮಾಡುತ್ತಿದ್ದ ವಿದ್ಯುತ್ ಆಧಾರಿತ ಕೆಲಸಗಳು ಅರ್ಧಕ್ಕೆ ನಿಂತು ಹೋದಾಗ ಜನರು ಬೆಸ್ಕಾಂ ಸಿಬ್ಬಂದಿಗಳನ್ನು ಬಯ್ದುಕೊಳ್ಳುವುದು ಸಾಮಾನ್ಯ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಬೆಸ್ಕಾಂ, ಕರೆಂಟ್ ಯಾವಾಗ ಹೋಗುತ್ತದೆ, ಅನಿಯಮಿತ ವಿದ್ಯುತ್ ಕಡಿತ ಸೇರಿದಂದೆ ಇತರೆ ಮಾಹಿತಿಗಳನ್ನು ಜನರಿಗೆ ಮುಂಚಿತವಾಗಿಯೇ ನೀಡಲು (ಬೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿ ನಿರ್ಧರಿಸಿದೆ.