ಬಂಧಿಖಾನೆ ಇಲಾಖೆಯ ಎಡಿಜಿಪಿ ಎನ್.ಎಸ್. ಮೇಘರಿಕ್ ಅವರು ಮಾತನಾಡಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿ 2 ಜೈಲುಗಳನ್ನು ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಜೈಲು ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಪ್ರತೀ ಕಾರಾಗೃಹಕ್ಕೂ 10 ಎಕರೆ ಭೂಮಿ ಬೇಕಿದೆ. ಕಾರಾಗೃಹ ನಿರ್ಮಾಣಕ್ಕೆ ಭೂಮಿ ದೊರಕಿದ್ದು, ಒಮ್ಮೆ ಜೈಲು ಸ್ಥಾಪನೆಗೊಂಡ ಬಳಿಕ ಎಲ್ಲಾ ಸಮಸ್ಯೆಗಳು ದೂರಾಗಲಿದೆ ಎಂದು ಹೇಳಿದ್ದಾರೆ.