ಪಿಜಿಯಲ್ಲಿ ನಿರ್ವಾಹಕಿಯಾಗಿದ್ದ ಮಹಿಳೆಯೊಬ್ಬರ ಮಹ ಟಿ.ನರಸಿಪುರದ ಕುಮಾರ್ ನ ಪರಿಚಯ ಮಾಡಿಕೊಂಡ ಸೋನು ತನ್ನ ವ್ಯಥೆಯ ಕಥೆಯನ್ನು ಅವನಿಗೆ ಹೇಳಿ ತಾನು ವಿಜಯಾ ಅವರನ್ನು ಕೊಲ್ಲಬೇಕೆಂದೂ ಹೇಳಿದ್ದಳು. ಹಣ ಸಿಗುವುದೆನ್ನುವ ಹಂಬಲಕ್ಕೆ ಅವನೂ ಒಪ್ಪಿಕೊಂಡಿದ್ದ. ಅದರಂತೆ ಮಂಗಳವಾರ ವಿಜಯಾ ಅವರ ಮನೆಗೆ ತೆರಳಿದ. ಸೋನು ಅವರಿಗೆ ಮದ್ಯ ಕುಡಿಸಿ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದ್ದಳು. ಬಳಿಕ ಸ್ನೇಹಿತ ಕುಮಾರ್ ನನ್ನು ಕರೆಸಿಕೊಂಡು ಇಬ್ಬರೂ ಸೇರಿ ಸುತ್ತಿಗೆ, ಮರದ ತುಂಡಿನಿಂದ ಹೊಡೆದು ಕೊಂದು ಹಾಕಿದ್ದಾರೆ ಎಂದು ಪೋಲೀಸರು ತಿಳಿಸಿದರು.