ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅಸೋಕ ಹಾರನಹಳ್ಳಿ ಅವರು, ಪ್ರಮಾಣಪತ್ರದಲ್ಲಿ ಲಿಂಗಾಯತರು ಇಷ್ಟಲಿಂಗ ಪೂಜಿಸುತ್ತಾರೆ. ವೇದಗಳನ್ನು ಅನುಸರಿಸುವುದಿಲ್ಲ ಎಂದೆಲ್ಲಾ ಬರೆದಿದ್ದಾರೆ. ಅಕ್ರಂ ಬಾಷಾ ಅವರು ಅಲ್ಪಸಂಖ್ಯಾತ ಸಮುದಾಯದವರು. ಅಂತಹವುರ ಲಿಂಗಾಯತರು ಪೂಜಾ ವಿಧಾನಗಳ ಬಗ್ಗೆ ಹೇಗೆ ಬರೆಯಲು ಸಾಧ್ಯ? ಅವರಿಗೆ ಹಿಂದೂ ಧರ್ಮದ ಬಗ್ಗೆ ಎಷ್ಟು ತಿಳಿದಿದೆ? ಎಂದು ಪ್ರಶ್ನಿಸಿದರು.